ವಿಷಯಕ್ಕೆ ಹೋಗಿ

ವಂಕ ಮೂತಿ ಹನುಮಪ್ಪನ ಸಂಕಟ


‘ದೇವ್ರೇ ನನ್ ಹುಡುಗಿ ಬಂದಾಳ, ಅವ್ಳು ನೋಡಾಕ ಸನ್ನಿಲಿಯೋಲ್ ತರಾ ಅಲ್ಲದಿದ್ರೂ ಒಂದ್ ರೆಂಜಿಗೆ ರಮ್ಯಾ, ಮಲ್ಲಿಕಾ ಶರಾವತ್ ಇದ್ದಾಂಗ ಅದಾಳಾ... ಅಕಿಗೆ ನಂಗ ಸೆಟ್ ಮಾಡಿದ್ರ ನಿಂಗ ಒಂದು ಕಾಯಿ ಒಡೀತೀನಿ’ ಅಂತ ಹುಡುಗನೊಬ್ಬ ಶನಿವಾರದ ಸಾಯಂಕಾಲದ ಸಮಯದಲ್ಲಿ ಒಂದೇ ಉಸುರಿಗೆ ಬೇಡಿಕೊಂಡ.
ಆ ದೇವರು ಬ್ಯಾರೆ ಯಾರು ಅಲ್ಲ. ವಾಮನಪುತ್ರ, ರಾಮನಭಕ್ತ, ಗುಡ್ಡವನೇತ್ತಿದ ಆಂಜನೇಯ, ಬ್ರಹ್ಮಾಂಡದಲ್ಲಿ ಮೊದಲಬಾರಿಗೆ ಸಿಕ್ಸ್‍ಪ್ಯಾಕ ಮಾಡಿಕೊಂಡ ಹನುಮಂತ, ನನ್ ಪಾಲಿಗೆ ವಂಕ ಮೂತಿ ಹನುಮ್ಯಾ..!
ವಂಕ ಮೂತಿ ಹನುಮ್ಯಾ ಮೊದಲಾ ಬ್ರಹ್ಮಚಾರಿ. ಅವನಿಗೆ ಹುಡುಗಿ ಸಿಗಲಾರದೆ ಮೂತಿ ಸಿಂಡರಿಸಿಕೊಂಡು ನಿಂತಲ್ಲೇ ನಿಂತು ಕಾಲು ನೊಯಿದರೂ ಪರವಾಗಿಲ್ಲ ಜಗವ ರಕ್ಷಿಸೋ ಪಣ ತೊಟ್ಟಿದ್ದಾನೆ. ಅಂತವನ ಎದುರು ಈ ಹುಡುಗಾ ಹುಡುಗಿ ಕೊಡು ಎಂದು ಎಟಿಎಮ್ ಮುಂದೆ ಡ್ರಾ ಮಾಡಿಕೋಳ್ಳುವ ರೀತಿ ಬೇಡ್ತಾ ಇದ್ದರೆ ಆ ದ್ಯಾವ್ರಿಗೆ ಹೊಟ್ಟ್ಯಾಗ ಖಾರ ಕಲಸಿದಂಗ ಆಗಲಾರದೆ ಇರಲಾರದು.
ಅದರಾಗ ಬ್ಯಾರೆ ಈ ಹುಡುಗ್ಯಾರು ನೀಲಿ,ಹಳದಿ,ಕೆಂಪು ಜಗಮಗಿಸೋ ಬಟ್ಟಿ ಹಾಕ್ಕೊಂಡು, ಇಡೀ ಊರಿಗೆ ಪುಗಸೆಟ್ಟೆ ಸೆಂಟ್ ವಾಸನೆ ಬಡಿಸುತ್ತಾ, ಮಲ್ಲಿಗೆ, ರೋಜ್, ಸೇವಂತಿ ಇತ್ಯಾದಿ ಮುಡಿದುಕೊಂಡು ಹನುಮಪ್ಪನ ಗುಡಿಗೆ ಬಂದ್ರ ಆ ದೇವರಿಗೆ ಟೆಂಪರೇಚರ್ ಬಂದು ಜ್ವರಾಗೀರಾ ಬರಾಂಗಿಲೇನು ಅನ್ನುವದು ನನ್ನ ಬಹುದೊಡ್ಡ ಬಿಡಿಸಲಾರದ ಗಣಿತ ಯಕ್ಷಪ್ರಶ್ನೆಯಾಗಿದೆ.
ಅವನಿಗೂ ಆಸೆ ಇರುತಲ್ವಾ..? ನನಗೂ ಸಂಸಾರ ಮಾಡೋಕೇ ಅಲ್ಲದಿದ್ದರೂ, ಅಟ್‍ಲಿಷ್ಟ್ ಒಂದು ಫಿಗರ್ ಆದ್ರೂ ಮೆಂಟೈನ್ ಮಾಡಬೇಕೆಂದು. ಆದರೆ ಸವ್ಯಸಾಚಿಯಾದ ಹನುಮಪ್ಪ ಎದುರಿಗೆ ದೀಪಿಕಾ ಪಡುಕೋಣೆ ನಿಂತರೂ ಸರಿಯೆ, ಬಾಜು ಮನೆ ಚಂದ್ರಕಲಾ ನಿಂತರೂ ಸರಿಯೇ ದಪ್ಪ ಕಣ್ಣು ಬಿಡಕೋತ ಅವರ ಆಸೆಗಳನ್ನು ಪೂರೈಸುತ್ತಾ ಮಹಾನ್ ‘ಗಾಡ್’ಫಾದರ್ ಎನಿಸಿಕೊಂಡಿದ್ದಾನೆ.
ಶನಿವಾರ ಬಂತ್ರದ್ರ ಸಾಕು ಈ ಪಡ್ಡೆ ಹೈಕಳಿಗೆ ಹನುಮಪ್ಪನ ಗುಡಿಯೇ ಕಾಲೇಜ್ ಕ್ಯಾಂಪಸ್ ಆಗಿ ಬದಲಾಗುತ್ತದೆ. ಬರುವ ಹುಡುಗರಿಗೆ, ಹುಡುಗಿಯರಿಗೆ, ಆಗ ತಾನೇ ಬಡ್ತಿ ಹೊಂದಿದ ಆಂಟಿಯರಿಗೆ ‘ಕಾಳು’ ಹಾಕಲು ರೆಡಿಯಾಗುತ್ತಾರೆ. ಇದ್ಯಾವುದರ ಅರಿವಿಲ್ಲದೇ ನನ್ನ ಪ್ರೀತಿಯ ಹನುಮ್ಯಾ ಆರ್ಶಿವದಿಸಿ ಪ್ರಸಾದ ನಿಡುತ್ತಾನೆ. ಅವನು ಮಾತ್ರ ‘ಉಪ್ಪಿನ’ ನೈವೀದ್ಯ’ ಸ್ವೀಕರಿಸಿ., ಭಕ್ತಾಧಿಗಳಿಗೆ ಸಿಹಿ ಬಾಳೆಹಣ್ಣು ನೀಡಿ ಸಂತಸ ಪಡುತ್ತಾನೆ.
ಆದರೆ ಅವನ ಸಂಕಟ ಕೇಳುವವರ್ಯಾರು..? ಎಲ್ಲಾ ದೇವರಿಗೂ ಎರಡೆರಡು ಹೆಂಡರೂ ಇರುವ ಹಾಗೇ ಅವನಿಗೆ ಒಂದಾದರೂ ಹೆಂಡ್ತಿ ಇರಬಾರದಾ.? ರಾಮ ತನ್ನ ಹೆಂಡರನ್ನು ಸಮುದ್ರದಿಂದ ಕರೆಸಿಕೊಳ್ಳಲಿ ಇವನನ್ನು ‘ಮೀಡೀಯೇಟರ್’ ಆಗಿ ಬಳಸಿಕೊಂಡ. ತನ್ನ ಸಂಸಾರವನ್ನು ಕಾಪಾಡಿದ ಅವನಿಗೆ ಒಂದು ಹುಡುಗಿಯನ್ನು ನೋಡಲಿಲ್ಲವಲ್ಲಾ ಇದು ಅನ್ಯಾಯವಲ್ಲೇದೇ ಮತ್ತೇನು..? ರಾಮನ ಜಾಗದಲ್ಲಿ ನಾನಿದ್ದರೆ ಅವನಿಗೆ ಒಂದು ಹುಡುಗಿಯನ್ನು ಗೊತ್ತು ಮಾಡಿ ಆಕಿ ಜೋತೆಗೆ ‘ಹನಿಮೂನ್’ಗೇ ಶ್ರೀಲಂಕಾಕ್ಕೆ ಕಳುಹಿಸುತ್ತಿದ್ದೆ..!
ಸುಮಾರು ವರ್ಷದಿಂದ ನಿಂತೇ ಇದ್ದರೂ ಅವನಿಗೆ ಯಾರಾದ್ರೂ ‘ಸ್ವಲ್ಪ ಕುರ್ಚಿ ಮ್ಯಾಗ ಕೂಡು’ ಅಂತ ಹೇಳಿಲ್ಲ. ಅವರ ಆಸೆ ಈಡೇರಿಸೋದಕ್ಕೆ ಹನುಮಪ್ಪ ಬೇಕು. ಆದ್ರ ಅವನ ಬಗ್ಗೆ ಕಾಳಜಿ ಮಾತ್ರ ಯಾರು ಮಾಡಂಗಿಲ್ಲ. ಅದು ಅನ್ಯಾಯದ ಪರಮಾವಧಿ ಅಲ್ಲದೇ ಮತ್ತೇನು ಅಲ್ಲ. ಪಾಪ ಅವನು ಸುಪ್ರೀಂಕೋರ್ಟ್‍ಗೆ ‘ಮಾನನಷ್ಟ ಮೊಕದ್ದೆಮೆ’ ಹೂಡಲು ಅವನಿಗೆ ಕಾನೂನು ಗೋತ್ತಿಲ್ಲ.
ಹುಡುಗಾ ಹುಡುಗಿ ಅವನ ಮುಂದ ಲವ್ ಸಕ್ಸಸ್ ಮಾಡಿದ್ರಾ ನಿಂಗೆ ತುಪ್ಪದ ದೀಪ ಹಚ್ಚತೀವಿ ಅಂತ ಅಂತಾರ. ಅವಂತ್ರೂ ತುಪ್ಪಾ ತಿಲ್ಲಾಕ ಎದ್ದು ಬಂದಿದ್ದು ನೋಡಿಲ್ಲ. ಬರೀ ಊದಿನಕಡ್ಡಿ ಹೋಗಿ ಮುಗನ್ಯಾಗ ತುಂಬಕೋತ ನಿಂತಾನ. ಹೋಗಿ ಮೂಗನ್ಯಾಗ ಹೊಕ್ರು ಒಂದು ದಿನಾನು ಸೀನಿಲ್ಲ, ಕೆಮ್ಮಿಲ್ಲ.
ಚಳ್ಯಾಗ ಮೈಮ್ಯಾಲ ತಣ್ಣೀರ ಸುರಿದು ಜಳಕಾ ಮಾಡಿಸಿದ್ರೂ ‘ಚಳಿ ಚಳಿ ತಾಳೆನು ಈ ಚಳಿಯ’ ಅಂತ ಹಾಡ ಹಾಡಿಲ್ಲ. ಕೆಂಪ ಟಾವೆಲ್ ಸುತ್ತುವಾಗ ಇದು ಬೋರು ಒಂದ್ ಜೀನ್ಸಪ್ಯಾಂಟ್ ಕೊಡ್ಸಿ ಅಂತ ಅಂಗಲಾಚಿಲ್ಲ. ಬಾಳ ಒಳ್ಳೆಯ ದೇವರು ಅಂವ.
ಬರೋ ಭಕ್ತಾಧಿಗಳೆಲ್ಲಾ ‘ಡಣ್ ಡಣ್’ ಅಂತ ಒಂದೇ ಸಮನೆ ಗಂಟೆ ಬಾರಿಸಿದ್ರೂ ಕಿರಿಕಿರಿಯಾಗ್ತದ, ಕಿವಿ ಕಿವುಡಾಗತ್ದಾದ ‘ಡೋಂಟ್ ಡಿಸ್ಟರ್ಬ್’ ಅಂತ ಬಯ್ದಿಲ್ಲ. ಪಾಪಾ ಅನಿಸುತ್ತೆ. ಆ ಪೂಜಾರಿ ಮಹಾಶಹ ಅವನ ಕಿವಿಯೊಳಗ ಹತ್ತಿಯಾದ್ರೂ ಇಡಬಾರಾದ.
ನಮ್ಮೂರಾಗಿನ ಹನುಮಪ್ಪನ ಮ್ಯಾಲ ನಾಯಿ ಸುಸು ಮಾಡಿದ್ರೂ ಅದಕ ಕಲ್ಲು ತಗೊಂಡು ಹೊಡೆದಿಲ್ಲ. ರಾತ್ರಿ ಲೈಟ್ ಹಚ್ರಿ ಬಿಡ್ರೀ ಸಂಬಂದಿಲ್ಲ. ಸೋಳ್ಳೆ ಕಡಿದು ಡೆಂಗ್ಯೂ, ಮಲೇರಿಯಾ ಬರತಾದ ಸೋಳ್ಳೆ ಕ್ವಾಯಿಲ್ ಹಚ್ಚು ಅಂತ ಪೂಜಾರಿಗೆ ರೆಕಮಂಡೆಶನ್ ಮಾಡಿಲ್ಲ. ಅದಕ ನನಗ ಹನುಮಪ್ಪ ನನ್ನ ಪ್ರೀತಿಯ ಹನುಮ್ಯಾ ಆಗಿದ್ದು.
ಪಾಪ ಹನುಮ್ಯಾ. ಅವನ ಹತ್ರ ಬರೋ ಹುಡುಗ್ಯಾರಿಗೆ ಪ್ರಪೋಸ್ ಮಾಡೊಕೆ ಬರಲಾರದಷ್ಟು ಮುಗ್ಧ ಮನುಷ್ಯಾ. ಎಸ್.ಎಂ.ಎಸ್ ಮಾಡೋಕು ಗೋತ್ತಿಲ್ಲ, ಕಣ್ಣು ಮಿಟುಕಿಸೋಕು ಗೋತ್ತಿಲ್ಲ, ಹಾಯ್ ಹಲೋ ಅನ್ನೊಕು ಭಯ. ಪೂಜಾರಿ ಅವನ ಎದರೆ ಮಧುವೆಯಾಗಿ ಒಂದು ವರ್ಷದೊಳಗೆ ತನ್ನ ಮಕ್ಕಳಿಗೆ ಅವನ ಎದುರೇ ನಾಮಕರಣ ಮಾಡುವಾಗ ಹನುಮಪ್ಪ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತಿರುತ್ತಾನೆ ‘ಬಂಗಾರದ ಮನುಷ್ಯ’ ಸಿನಿಮಾದ ರಾಜಕುಮಾರ ತರ ನಿಸ್ವಾರ್ಥಿಯಾಗಿ.
ಅವ ಶಾದಿ.ಕಾಮ್ ನ್ಯಾಗ ನನಗ ಒಂದು ಹುಡುಗಿ ಬೇಕು ಅಂತ ಪ್ರೋಪೈಲ್ ಕ್ರೀಯೇಟ್ ಮಾಡಿಲ್ಲ. ಪೇಸ್‍ಬುಕು ಗೀಸ್ಬುಕ್ಕು, ವಾಟ್ಸ್‍ಪ್, ಟ್ವಟರ್ ಇತ್ಯಾದಿಗಳ ಪರಿಚಯ ವಿಲ್ಲದ ಮಹಾ ಶತದಡ್ಡ ಎಂದರೆ ತಪ್ಪೇನು ಇಲ್ಲ.
ಅಮೀರಖಾನ್, ಶಾರುಕ್‍ಖಾನ್ ಬಿಟ್ಟಿರುವ ಸಿಕ್ಸ್‍ಪ್ಯಾಕ್ ಗೆ ಅದೆಷ್ಟೂ ಹುಡುಗಿಯರು ಸಾಯ್ತಾರೋ ಗೊತ್ತಿಲ್ಲ. ಎಲ್ಲಾ ಊರಿನಲ್ಲಿ ಪ್ರತಿಯೊಂದು ಓನಿಯಲ್ಲಿ ಅಂಗಿ ಬಿಚ್ಚಿ ಬರೀ ಇಲ್ಯಾಸ್ಟಿಕ್ ಚಡ್ಡಿ ಮ್ಯಾಗ ಸಿಕ್ಸ್‍ಪ್ಯಾಕ್ ತೋರಿಸಕೋತ ನಿಂತ್ರು ಒಂದ್ ಹುಡುಗಿನೂ ಅವನ ಜೊತೆ ‘ಸೆಲ್ಪಿ’ ತೊಗೊಂಡಿದ್ದು ಚಾನ್ಸೆಯಿಲ್ಲ.
ಹಂಗಂತ ಅವನೇನು ಬಾರ್‍ಗೆ ಹೋಗಿ ಕಂಟಮಟ ಕುಡಿದು ಉಪ್ಪಿನಕಾಯಿ ನೆಕ್ಕುತ್ತಾ ‘ಸರಾಯಿ ಶಿಷೆಯಲಿ ನನ್ನ ದೇವಿ ಕಾಣುವಳು’ ಅಂತ ಪ್ಯಾಥೋ ಸಾಂಗ್ ಹಾಡಿಲ್ಲ. ಅದಕ ಅಂವ ನನ್ನ ಪ್ರೀತಿ ಪಾತ್ರ ದೇವರು.
ಹನುಮಪ್ಪ ನಿನ್ ಜೋತೆ ಯಾರೂ ಇಲ್ಲ ಅಂತ ಚಿಂತಿ ಮಾಡಬ್ಯಾಡ. ನಾ ಅದೀನಿ. ನಾನು ನಿಂನಂಗ ಯಾವ ಹುಡುಗೀನು ಕಣ್ ಎತ್ತಿ ನೋಡಿಲ್ಲ. (ಒಂದ್ ಕಣ್ಣು ಮುಚ್ಚಿ ನೋಡಿನಿ) ಇಬ್ರು ಸೇರಿ ‘ಹುಡುಗಿರೆಂದ್ರೆ ಡೆಂಜರಪ್ಪೋ’ ಅಂತ ಲೈಡ್‍ಸ್ಪೀಕರ್ ಆನ್ ಮಾಡಿ ಹಾಡಕೊತ ಕುಣಕೊತ ಎಂಜಾಯ ಮಾಡೋಣು.
ಒಂದ್ ಮಾತ ಕೇಳ್ತಿನಿ ಸಿಟ್ಟ ಆಗಬ್ಯಾಡಾ, ನಂಗ ಚೋಲೋ ಹುಡುಗಿ ಸಿಗ್ಲಿ ಅಂತ ಆರ್ಶೀವಾದ ಮಾಡು..!
ಲೇಖನ : ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಏಕಾಂಗಿಯೊಬ್ಬನ ದಾರಿಯ ಕವಲುಗಳು...

ಇಷ್ಟೂ ದೂರ ಸಾಗಿ ಬಂದರೂ ನಾನು ಇನ್ನು ಗುರಿ ಮುಟ್ಟೆ ಇಲ್ಲ ಎಂಬ ಕಠೋರ ಸತ್ಯ ಅರಿವಿಗೆ ಬರುವದು ಒಮ್ಮೆ ಕತ್ತು ತಿರುಗಿಸಿ ಹಿಂದೆ ನೋಡಿದಾಗ. ನಾವು ಅಂದುಕೊಂಡ ಕನಸು, ನಾವು ಕಟ್ಟಿಕೊಂಡ ಗುರಿಯನ್ನು ತಲುಪುವ ಹಾದಿಯಲ್ಲಿ ನೂರೆಂಟು ಕವಲುಗಳು, ತಗ್ಗುದಿನ್ನೆಗಳು ಹೆಡೆ ಬಿಚ್ಚಿ ಸ್ವಾಗತಿಸುತ್ತವೆ. ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ. ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ. ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..? ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ

ಸೂರ್ಯಪುತ್ರರ ನೋವಿಗೆ ಇಲ್ಲಿದೆ ಪರಿಹಾರ

ಹರೆಯದ ವಯಸಲ್ಲಿ ಬೇಗನೆ ಏಳುವದು ಕಷ್ಟಕಣ್ರೀ. ಗಲ್ಲಿಗೇರಿಸುವ ಶಿಕ್ಷೆಯಾದ್ರೂ ಕೊಡಿ ಬೆಳಗ್ಗಿನ ಜಾವದಲ್ಲಿ ಏಳುವ ಕೆಲಸ ಹಚ್ಚಬೇಡಿ. ರಾತ್ರಿ ಮೂರರವರೆಗೆ ಸಿನಿಮಾ, ಮೇಸೆಜು, ವಾಟ್ಸಾಪ್ ಅಂತ ಟೈಮ್‍ತಿಂದು ಮುಸುಕು ಹೊದ್ದು ಮಲಗಿದಾಗ ಜಗದ ಪರಿವೆ ಇಲ್ಲದೆ ಲೋಕದ ಯಾವುದೇ ಚಿಂತೆ ಇಲ್ಲದವರಂಥೇ ನಿದ್ದೆ ಆವರಿಸಿರುತ್ತದೆ. ಬೆಳಗ್ಗೆ ಯಾರಾದ್ರೂ ಮುಸುಕು ಹೊದ್ದು ಮಲಗಿದವನನ್ನು  ಎಚ್ಚರಿಸಿದಾಗ ಎದುರಿನವರ ಕೆನ್ನೆಯ ಮೇಲೆ ಬಿಟ್ಟಿಯಾಗಿ ಬಾಸುಂಡೆ ಮೂಡಿಸುವಷ್ಟು ಸಿಟ್ಟು ಬರುತ್ತದೆ. ಅಲ್ರೀ ನೀವೆ ಹೇಳ್ರೀ... ಬೆಳಗ್ಗಿನ ಜಾವದಲ್ಲಿ ದೀಪಿಕಾ ಪಡುಕೋಣೆ ನಮ್ಮ ಜೊತೆ “ಚಾಟ್‍ಮಸಾಲ” ತಿನ್ನುವಾಗ ಯಾರಾದ್ರೂ ಡಿಸ್ಟರ್ಬ್ ಮಾಡಿದರೆ ನಿಮಗೂ ಸಿಟ್ಟು ಬರಲ್ವಾ..? ತಿಳಿನೀಲಿ ಕಂಗಳ ಹುಡುಗಿಯ ನೆನೆದು ಪೋಲಿ ಕನಸು ಕಾಣುತ್ತಾ ಅವಳ ಹತ್ತಿರ ಹೋಗಿ ಮುತ್ತನ್ನು ಕೊಡುವ ಸಮಯದಲ್ಲಿ ಮೈ ಮೇಲೆ ತಣ್ಣಿರು ಸುರಿದರೆ ಎಬ್ಬಿಸಿದವರನ್ನು ಜಾಡಿಸಿ ಒದೆಯುವಷ್ಟು ಸಿಟ್ಟು ಬರಲ್ವಾ..? ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿದ್ರೆ ಪರ್ಸನಾಲಿಟಿ ಚನ್ನಾಗಿ ಇರುತ್ತೆ ಅಂತ ಅದೇಷ್ಟೂ ಜನ ನಂಗೆ ತಲೆತಿನ್ನುತ್ತಿದ್ದರು. ನಾನೇನೊ ಜಾಂಗಿಗ್ ಮಾಡಲು ಆಸೆ. ಆದ್ರೆ ತಕರಾರು ಇರೋದು ನಸುಕಿನ ಜಾವ 5 ಗಂಟೆಗೆ ಏಳೋದು. ಸ್ವಾಮಿ ವಿವೇಕಾನಂದರು ನಮ್ಮಂತ ಸೂರ್ಯಪುತ್ರರಿಗೆ ದೇಶವನ್ನು ಮುನ್ನಡೆಯುವದಕ್ಕೊಸ್ಕರ  “ಏಳಿ ಎದ್ದೇಳಿ’ ಅಂತ ಸಿಂಹಘರ್ಜನೆ ಮಾಡಿದ್ದಾರೆ. ಎಷ್ಟು ಗಂಟೆಗೆ ಏಳಬೇಕು ಎಂದು ಹೇಳಿಲ್ಲ

ನಿನ್ನದು ಕಠೋರ ಮೌನ

ಅಧರಗಳಿಗೆ ಹೆಣೆದ ಕಸೂತಿ ಬಿಚ್ಚು ಹೆಪ್ಪುಗಟ್ಟಿದೆ ನಿನ್ನದು ಕಠೋರ ಮೌನ ನಿನ್ನ ಧನಿಗಾಗಿ ನಿಶಬ್ಧರಾಗಿ ಮಲಗಿದ್ದಾರೆ ಸ್ಮಶಾನದಲಿ ನಿನ್ನದು ಕಠೋರ ಮೌನ ಹಾಡು ಕುಣಿತ ಮೋಜಿನ ಮಧುಶಾಲೆಯ ಮಂಚದಲಿ ರತಿಸುಖದ ಉನ್ಮಾದಕತೆ ಕೊಳಕು ಶರಾಬಿನ ಬಟ್ಟಲಲಿ ಕೆನೆಗಟ್ಟಿದೆ ಎಳಸು ಹೃದಯದಲಿ ಬಂಧಿಯಾಗಿದೆ ಮರಿಮೀನು ಹೊರಬರಲಾಗದೆ ನಿನ್ನೆದೆಯ ಸದ್ದಿಗೆ ಕಿವಿ ನಿಮಿರಿಸಿ ಬರಗೆಟ್ಟಿದೆ ನಿನ್ನದು ಕಠೋರ ಮೌನ ಜಾತ್ರೆಯಲಿ ತೂರಿಬರುವ ಬೆಂಡು ಬತಾಸಿಗಿಂತಲೂ ಹರಿತ ಕಹಳೆ ಜಾಂಗಟೆ ಕಣ್ಣೀರು ಸುರಿಸಿ ಪಾಚಿಗಟ್ಟಿದೆ ನಿನ್ನದು ಕಠೋರ ಮೌನ ಮಾದಕ ನೀಳಕೂದಲಗಳ ಪಿಸುಗುಟ್ಟುವ ಮಾತಿಗೆ ಹಾಡಹಗಲೆ ಎದೆಸೆಟೆಸಿ ಬಳ್ಳಿಯಲ್ಲಿ ಪಾರಿಜಾತ ಹೂಗಟ್ಟಿದೆ ನಿನ್ನದು ಕಠೋರ ಮೌನ ಹುಚ್ಚಲೌಡಿ ‘ಮಿತ್ರಾ’ ಅವಳನ್ನೆಕೆ ನಿಂದಿಸುವೆ ಸುಖಾಸುಮ್ಮನೆ ಕಣ್ಣುತೆರೆದು ನೋಡು ನಿನ್ನ ಮನಸು ನೀತಿಗೆಟ್ಟಿದೆ ನಿನ್ನದು ಕಠೋರ ಮೌನ -    ಸಂಗಮೇಶ ಡಿಗ್ಗಿ 8553550012