ಇಷ್ಟೂ ದೂರ ಸಾಗಿ ಬಂದರೂ ನಾನು ಇನ್ನು ಗುರಿ ಮುಟ್ಟೆ ಇಲ್ಲ ಎಂಬ ಕಠೋರ ಸತ್ಯ ಅರಿವಿಗೆ ಬರುವದು ಒಮ್ಮೆ ಕತ್ತು ತಿರುಗಿಸಿ ಹಿಂದೆ ನೋಡಿದಾಗ. ನಾವು ಅಂದುಕೊಂಡ ಕನಸು, ನಾವು ಕಟ್ಟಿಕೊಂಡ ಗುರಿಯನ್ನು ತಲುಪುವ ಹಾದಿಯಲ್ಲಿ ನೂರೆಂಟು ಕವಲುಗಳು, ತಗ್ಗುದಿನ್ನೆಗಳು ಹೆಡೆ ಬಿಚ್ಚಿ ಸ್ವಾಗತಿಸುತ್ತವೆ.
ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ.
ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ.
ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..?
ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ ಕಾಣದ ಹಡಗಿನಂತಾಗುತ್ತದೆ ಬಾಳು. ತಮ್ಮ ಜೀವನವೇ ಗಟ್ಟಿಮಾಡಿಕೊಳ್ಳಲಾರದೇ ಪರಿತಪಿಸುವವು ನಮಗೆ ಪುಗ್ಸಟ್ಟೆ ಐಡಿಯಾ ಕೊಡುತ್ತಾ ನಮ್ಮ ಬಾಳನ್ನು ಕತ್ತಲಲ್ಲಿ ನೂಕಲು ನಿಂತಿರುತ್ತಾರೆ.
ಅಪ್ಪಅವ್ವ ಕಂಡ ಕನಸುಗಳನ್ನು ನನಸು ಮಾಡುವನು ನಾನೇ ಅಲ್ಲವೇ? ನನಗೆ ನನದೇ ಆದ ಗುರಿಯಿದೆ, ದಾರಿವಿದೆ, ಬಣ್ಣಬಣ್ಣದ ಕನಸುಗಳಿವೆ. ಅದು ಇತರರಿಗೆ ಯಾಕೆ ಅರ್ಥವಾಗುತ್ತಿಲ್ಲ?
ಇವರ ಜಾತ್ರೆಯ ನಡುವೆ ಪಾರಾಗಿ ಒಂಟಿಯಾಗಬೇಕು. ಒಂಟಿತನದಲ್ಲಿ ಏನೋ ಒಂಥರಾ ಸುಖವಿದೆ. ಒಂಟಿತನದಲ್ಲಿ ಹರಿಸಿದ ಕಣ್ಣಿರು ಭವಿಷ್ಯದಲ್ಲಿ ಮುತ್ತಿನ ಹನಿಗಳಾಗಿ ಮಾರ್ಪಾಡಾಗುತ್ತವೆ ಎಂದು ಎಲ್ಲೋ ಓದಿದ ನೆನಪು. ನಾನು ಅಳುವಾಗ ಮತ್ತೋಬ್ಬರ ಸಮಾಧಾನ ಅಲ್ಪ ಮಟ್ಟಿಗೆ ಸಮಾಧಾನ ನೀಡುತ್ತದೆ. ಅದೇ ಏಕಾಂಗಿಯಾಗಿ ಟೈವಾಕ್ ಗುಡ್ಡದ ಕೆಂಪುದಾರಿಯ ಮೇಲೆ ಕಣ್ಣೀರ ಹನಿಗಳನ್ನು ಸುರಿಸುತ್ತಾ, ದೂರದಲ್ಲಿ ಮಿನುಗುವ ನಕ್ಷತ್ರಗಳನ್ನು ನೋಡುತ್ತಾ ಸಾಗುವಾಗ ಏನೋ ಖುಷಿಯಾಗುತ್ತದೆ. ನನಗೆ ಎಲ್ಲಾ ಸಂಬಂಧಗಳು ಚಿಂದಿಯಾಗಿ ಹರಿದು ಹೋದರು ನಿಸ್ವಾರ್ಥಿ ಹಾಲುಗಲ್ಲದ ಚಂದಿರ ನನ್ನ ಜೋತೆ ಇರುತ್ತಾನೆ. ಅಷ್ಟು ಸಾಕಲ್ಲವೇ ನನಗೆ ನನ್ನ ನೋವನ್ನು ಅರ್ಥಮಾಡಿಕೊಂಡು ಹಿತವಾದ ತಂಗಾಳಿ ಬೀಸುತ್ತಾ ನಾ ನಡಯುವ ದಾರಿಯಲ್ಲಿ ಮಂದ ಬೆಳಕು ಚಲ್ಲಲ್ಲು.
ಏಕಾಂಗಿಯಾಗಿ ಸಾಗುವಾಗ ಸುಡುವ ಬಿಸಿಲು ಸಹ ಇಷ್ಟವಾಗುತ್ತದೆ. ರೂಮಿನ ಗೋಡೆಗಳು ಸಹ ಆಪ್ತವೆನಿಸುತ್ತವೆ. ಜೋರಾಗಿ ಅಳುವಾಗ ರಮಿಸದೆ ನನ್ನ ಪಾಡಿಗೆ ಬಿಟ್ಟು ನನಗೆ ಉಪದೇಶ ಮಾಡುವದಿಲ್ಲ. ಗೋಡೆಗಳ ಮೇಲೆ ನಾನೇ ಗೀಚಿದ ಸಾಲುಗಳು ಕೂಡಾ ಕೆಲವೊಮ್ಮೆ ಉಪದೇಶ ನೀಡುವಂತೆ ಭಾಸವಾದಾಗ ಅಳಿಸಿ ಬಿಡುತ್ತೇನೆ. ನನಗೆ ಯಾರೂ ಮಾತನಾಡಿಸಬಾರದು ಯಾವ ಸಂಭಂಧಗಳು ಇರಬಾರದು ಒಬ್ಬನೇ ಅಡ್ಡಾಟಬೇಕು ಗೋತ್ತು ಗುರಿಯಿಲ್ಲದೇ ಅನ್ನುವ ಸತ್ಯವು ಮನದಲ್ಲಿ ಗಟ್ಟಿಯಾಗಿ ಮೂಡುವಷ್ಟರಲ್ಲಿ ಮನೆಯಿಂದ ಕರೆ ಬಂದು ಮತ್ತೆ ಅದೇ ಗಜಿಬಿಜಿ ಸಂತೆಯೊಳಗೆ ನಾನು ಒಬ್ಬ ಅನ್ನೋ ಹರಿತವಾದ ಸತ್ಯ ಎದೆಯಲ್ಲಿ ಬರ್ಬರವಾಗಿ ಗಾಯಮಾಡಿದ ಅನುಭವವಾಗುತ್ತದೆ.
ಲೇಖನ :ಸಂಗಮೇಶ ಡಿಗ್ಗಿ
8553550012
ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ.
ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ.
ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..?
ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ ಕಾಣದ ಹಡಗಿನಂತಾಗುತ್ತದೆ ಬಾಳು. ತಮ್ಮ ಜೀವನವೇ ಗಟ್ಟಿಮಾಡಿಕೊಳ್ಳಲಾರದೇ ಪರಿತಪಿಸುವವು ನಮಗೆ ಪುಗ್ಸಟ್ಟೆ ಐಡಿಯಾ ಕೊಡುತ್ತಾ ನಮ್ಮ ಬಾಳನ್ನು ಕತ್ತಲಲ್ಲಿ ನೂಕಲು ನಿಂತಿರುತ್ತಾರೆ.
ಅಪ್ಪಅವ್ವ ಕಂಡ ಕನಸುಗಳನ್ನು ನನಸು ಮಾಡುವನು ನಾನೇ ಅಲ್ಲವೇ? ನನಗೆ ನನದೇ ಆದ ಗುರಿಯಿದೆ, ದಾರಿವಿದೆ, ಬಣ್ಣಬಣ್ಣದ ಕನಸುಗಳಿವೆ. ಅದು ಇತರರಿಗೆ ಯಾಕೆ ಅರ್ಥವಾಗುತ್ತಿಲ್ಲ?
ಇವರ ಜಾತ್ರೆಯ ನಡುವೆ ಪಾರಾಗಿ ಒಂಟಿಯಾಗಬೇಕು. ಒಂಟಿತನದಲ್ಲಿ ಏನೋ ಒಂಥರಾ ಸುಖವಿದೆ. ಒಂಟಿತನದಲ್ಲಿ ಹರಿಸಿದ ಕಣ್ಣಿರು ಭವಿಷ್ಯದಲ್ಲಿ ಮುತ್ತಿನ ಹನಿಗಳಾಗಿ ಮಾರ್ಪಾಡಾಗುತ್ತವೆ ಎಂದು ಎಲ್ಲೋ ಓದಿದ ನೆನಪು. ನಾನು ಅಳುವಾಗ ಮತ್ತೋಬ್ಬರ ಸಮಾಧಾನ ಅಲ್ಪ ಮಟ್ಟಿಗೆ ಸಮಾಧಾನ ನೀಡುತ್ತದೆ. ಅದೇ ಏಕಾಂಗಿಯಾಗಿ ಟೈವಾಕ್ ಗುಡ್ಡದ ಕೆಂಪುದಾರಿಯ ಮೇಲೆ ಕಣ್ಣೀರ ಹನಿಗಳನ್ನು ಸುರಿಸುತ್ತಾ, ದೂರದಲ್ಲಿ ಮಿನುಗುವ ನಕ್ಷತ್ರಗಳನ್ನು ನೋಡುತ್ತಾ ಸಾಗುವಾಗ ಏನೋ ಖುಷಿಯಾಗುತ್ತದೆ. ನನಗೆ ಎಲ್ಲಾ ಸಂಬಂಧಗಳು ಚಿಂದಿಯಾಗಿ ಹರಿದು ಹೋದರು ನಿಸ್ವಾರ್ಥಿ ಹಾಲುಗಲ್ಲದ ಚಂದಿರ ನನ್ನ ಜೋತೆ ಇರುತ್ತಾನೆ. ಅಷ್ಟು ಸಾಕಲ್ಲವೇ ನನಗೆ ನನ್ನ ನೋವನ್ನು ಅರ್ಥಮಾಡಿಕೊಂಡು ಹಿತವಾದ ತಂಗಾಳಿ ಬೀಸುತ್ತಾ ನಾ ನಡಯುವ ದಾರಿಯಲ್ಲಿ ಮಂದ ಬೆಳಕು ಚಲ್ಲಲ್ಲು.
ಏಕಾಂಗಿಯಾಗಿ ಸಾಗುವಾಗ ಸುಡುವ ಬಿಸಿಲು ಸಹ ಇಷ್ಟವಾಗುತ್ತದೆ. ರೂಮಿನ ಗೋಡೆಗಳು ಸಹ ಆಪ್ತವೆನಿಸುತ್ತವೆ. ಜೋರಾಗಿ ಅಳುವಾಗ ರಮಿಸದೆ ನನ್ನ ಪಾಡಿಗೆ ಬಿಟ್ಟು ನನಗೆ ಉಪದೇಶ ಮಾಡುವದಿಲ್ಲ. ಗೋಡೆಗಳ ಮೇಲೆ ನಾನೇ ಗೀಚಿದ ಸಾಲುಗಳು ಕೂಡಾ ಕೆಲವೊಮ್ಮೆ ಉಪದೇಶ ನೀಡುವಂತೆ ಭಾಸವಾದಾಗ ಅಳಿಸಿ ಬಿಡುತ್ತೇನೆ. ನನಗೆ ಯಾರೂ ಮಾತನಾಡಿಸಬಾರದು ಯಾವ ಸಂಭಂಧಗಳು ಇರಬಾರದು ಒಬ್ಬನೇ ಅಡ್ಡಾಟಬೇಕು ಗೋತ್ತು ಗುರಿಯಿಲ್ಲದೇ ಅನ್ನುವ ಸತ್ಯವು ಮನದಲ್ಲಿ ಗಟ್ಟಿಯಾಗಿ ಮೂಡುವಷ್ಟರಲ್ಲಿ ಮನೆಯಿಂದ ಕರೆ ಬಂದು ಮತ್ತೆ ಅದೇ ಗಜಿಬಿಜಿ ಸಂತೆಯೊಳಗೆ ನಾನು ಒಬ್ಬ ಅನ್ನೋ ಹರಿತವಾದ ಸತ್ಯ ಎದೆಯಲ್ಲಿ ಬರ್ಬರವಾಗಿ ಗಾಯಮಾಡಿದ ಅನುಭವವಾಗುತ್ತದೆ.
ಲೇಖನ :ಸಂಗಮೇಶ ಡಿಗ್ಗಿ
8553550012
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ