ವಿಷಯಕ್ಕೆ ಹೋಗಿ

ಮಸ್ತಕಕ್ಕಿಳಿಯುವ ಪುಸ್ತಕದ ಆಲಯದೊಳಗೆ...

ಗ್ರಂಥಾಲಯ ಜೀವಂತ ದೇವಾಲಯ ಎನ್ನುವ ಬೋರ್ಡಿನ ಕೆಳಗೆ ಪ್ರವೇಶಿಸಿದಾಗ ಆಳೆತ್ತರ ಏಳೆಂಟು ಕಪಾಟುಗಳು ಕಣ್ಣಿಗೆ ಬೀಳುತ್ತವೆ. ನೀಟಾಗಿ ಪುಸ್ತಕಗಳನ್ನು ಜೋಡಿಸುವದೆಂದರೆ ಓದುಗರಿಗೆ ಅದೆಷ್ಟೂ ಹಿಂಸೆನೋ..? ಅಡ್ಡಾದಿಡ್ಡಿಯಾಗಿ ಕಾಲುಜಾರಿ ಬಿದ್ದ ಪುಸ್ತಕಗಳ ಸಾಲಿನಲ್ಲಿ ಇಷ್ಟವಾದದನ್ನು ಹುಡುಕುವಾಗ ಧೂಳು ಮೂಗಿನ ಹೊಳ್ಳೆಯೊಳಗೆ ಲಬಕ್ಕೆನೆ ಹೊಕ್ಕೆ ಗಬಕ್ಕನೇ ಸೀನುವಂತೆ ಮಾಡುತ್ತದೆ.
ಕತೆಯ ಪುಸ್ತಕ ಎಂದು ಬರೆದ ರ್ಯಾಕ್‍ನಲ್ಲಿ ಹಳೆಯ ಕಾದಂಬರಿಗಳ ರಾಶಿ ಇರುತ್ತದೆ. ವಿಜ್ಞಾನ ಎಂದ ಕಡೆ ಕವನ ಸಂಕಲನದ ಗುಚ್ಛಗಳು ಓದಲು ಮೈ ತೆರೆದುಕೊಂಡು ನಿಂತಿರುತ್ತವೆ. ರಟ್ಟು ಹರಿದು ಹೋಗಿ ಹೆಸರು ಮರೆತ ಅನಾಥ ಬುಕ್ಕುಗಳೂ ಆಶಾಭಾವನೆ ಹೊತ್ತುಕೊಂಡು ಬದುಕುತ್ತಿರುತ್ತವೆ.
ಯಾರೋ ಬರೆದ ಅನುಭವದ ಸಾಲುಗಳು ಮತ್ಯಾರಿಗೋ ಇಷ್ಟವಾಗಿ ಹಸಿರು,ಕೆಂಪು ಪೆನ್ನಿನ ಮಾರ್ಕುಗಳನ್ನು ಅಂಟಿಸಿಕೊಂಡು ಫೋಕಸ್ ಆಗುತ್ತವೆ. ಮತ್ತೇ ಅಲ್ಲಲ್ಲಿ ಟೀಕೆ-ಟಿಪ್ಪಣಿಯ ವಿಮರ್ಶೆ ಕೂಡಾ ಇರುತ್ತದೆ. ಪ್ರೇಮಗವನಕ್ಕೆ ಹುಡುಗಿಯ ಇಂಗ್ಲೀಷ್ ಕ್ಯಾಪಿಟಲ್ ಲೆಟರ್‍ನ್ನು ದೊಡ್ಡಾದಾಗಿ ಬಿಡಿಸಿ ಕನಸುಗಳಿಗೆ ಜಾರಿಹೋಗುವ ಸಂಭವವೂ ಸಾಕಷ್ಟು ಪುಸ್ತಕದಲ್ಲಿ ಗೋಚರವಾಗುತ್ತವೆ.
ರೋಚಕವಾಗಿ ಓದಿಸಿಕೊಳ್ಳುತ್ತಾ ಸಾಗುವ ಕಾದಂಬರಿ ಇನ್ನೇನು ಕ್ಮೈಮ್ಯಾಕ್ಸ್ ಸ್ಟೋರಿಯ ಕಡೆ ಬಂದಾಗ ಯಾರೋ ಹಾಳೆ ಕಿತ್ತುಕೊಂಡು ಹೋಗಿರುವದನ್ನು ಕಂಡು ಸಾಂಭಾರ ಇಲ್ಲದೇಯೇ ಮಸಾಲದೋಸೆ ತಿಂದ ಅನುಭವವಾಗುತ್ತದೆ. ಹಾಳೆ ಕಿತ್ತಿದವನನ್ನು ಮನದಲ್ಲಿ ಅವನ ಮತ್ತು ಅವನ ಇಡೀ ವಂಶವನ್ನೇ ಜಾಲಾಡಿಸುವಂತೆ ಸಿಟ್ಟು ಉಕ್ಕಿ ಎದುರಿನ ಟೇಬಲ್‍ಗೆ ರಪ್ಪಕ್ಕನೇ ಮುಷ್ಟಿಯಿಂದ ಗುದ್ದಿ ಇತರರು ನಮ್ಮ ಕಡೆ ನೋಡುವಂತೆ ಮಾಡುತ್ತೇವೆ.
ಗೊರಕೆಯ ಸಪ್ಪಳ, ಮೇಸೆಜ್‍ನ ಟ್ಯೂನ್, ಪರಪರ ತಿರುಗಿಸುವ ಹಾಳೆಗಳ ಸದ್ದು ಶಾಂತವಾಗಿ ಓದುತ್ತಿದ್ದ ವಿಶ್ವಾಮಿತ್ರನ ತಪ್ಪಸ್ಸಿಗೆ ಮೇನಕೆಯ ಹಾಗೇ ಭಂಗ ಮಾಡುತ್ತವೆ. ಅಂಗವಿಕಲ ಕುರ್ಚಿ ಅಲುಗಾಡುತ್ತಾ ಧ್ಯಾನಕ್ಕೆ ಅಡ್ಡಿ ಮಾಡುವಲ್ಲಿ ಯಶಸ್ವಿಯಾಗುತ್ತೆ. ಒಬೆರಾಯನ ಕಾಲದ ಟ್ಯೂಬ್‍ಲೈಟ್ ಸೆಕೆಂಡಿಗೆ ಎರಡು ಬಾರಿಯಂತೆ ಯಾರೂ ಏನೆ ಅಂದರೂ ಸರಿಯೇ ತನ್ನಪಾಡಿಗೆ ತಾನು ಕಣ್ಣುಹೊಡೆಯುತ್ತಾ ಇರುತ್ತದೆ.
ಅವರಿಗೆ ಅದು ಟೈಪಾಸ್ ಮಾಡುವ ಅಡ್ಡಾ, ಇವರಿಗೆ ಸರಸ್ವತಿಯ ಗುಡಿ, ಕೆಲವರಿಗೆ ವಿದ್ಯಾವಂತರು ಎನಿಸಿಕೊಳ್ಳುವ ತಾಣ, ಇನ್ನುಳಿದವರಿಗೆ ಅದು ಸಾರ್ವಜನಿಕ ನಿದ್ರಾಗೃಹ.
ಗಡಿಯಾರ ನೋಡಲು ತಲೆ ಎತ್ತಿದರೆ ದೊಡ್ಡಮುಳ್ಳು ಮುರಿದು ಚಿಕ್ಕ ಮುಳ್ಳು ಬಾಲ ಹಿಡಿದ ಸತ್ತ ಇಲಿಯಂತೆ ಜೋತಾಡುತ್ತಿರುತ್ತದೆ. ಪ್ಯಾನು ಜೇಡರಬಲೆಯಿಂದ ಸಿಕ್ಕಿಹಾಕಿಕೊಂಡು ಹೊರಬರಲು ಒದ್ದಾಡುತ್ತಿರುತ್ತದೆ. ಕುಡಿಯುವ ನೀರಿನ ಟಾಕಿ ನೆಪಕ್ಕೆ ಮಾತ್ರ ಮೂಲೆಯಲ್ಲಿ ಗ್ಲಾಸು ಕಳೆದುಕೊಂಡು ದಾಹ ತಣಿಸುವ ನಾಟಕ ಮಾಡುತ್ತಿರುತ್ತದೆ.
ಪತ್ರಿಕೆಯ ಮಧ್ಯಪುಟ ಅಲ್ಲೇಲ್ಲೋ ಟೇಬಲ್ ಕೆಳಗೆ ಅಡಗಿ ಕುಳಿತಿರುತ್ತದೆ. ಮುಖಪುಟದಲ್ಲಿ ದೇವೆಗೌಡನ ಪೋಟೊ ನೋಡುತ್ತಾ ಬಿಳಿ ನೆಹರು ಶರ್ಟಿನ ವ್ಯಕ್ತಿ ಮೀಸೆ ತಿರುವುತ್ತಾನೆ. ತುಂಡುಡುಗೆಯ ನಾಯಕಿಯ ದೇಹಸಿರಿ ನೋಡುತ್ತಾ ಮಗ್ನರಾಗಿರುತ್ತಾನೆ ಚಿಗುರುಮೀಸೆಯ ಹುಡುಗ. ಮೇಜಿನ ತುದಿಯಲ್ಲಿ ಯಾರೋ ಒಬ್ಬರು ಪುಸ್ತಕದ ಒಳಗೆ ‘ಆ ಪುಸ್ತಕ’ ಅಡಗಿಸಿ ರಕ್ತಸಂಚಲನ ಹೆಚ್ಚಿ  ಬೆವರು ಬರುವಂತೆ ಓದುತಿರುತ್ತಾನೆ ಅವಾಗವಾಗ ಆಜುಬಾಜು ಇರುವವರನ್ನು ನೋಡುತ್ತಾ.
ಓದುಗರಿಗೆ ಬರ ಬಿದ್ದು ಪ್ರಶಸ್ತಿ ಪಡೆದ ಪುಸ್ತಕಗಳು ಕಣ್ಣಿರು ಸುರಿಸುತ್ತಾ ಮೇಲಿನ ರ್ಯಾಕನಲ್ಲಿ ಅಸ್ಪøಶ್ಯರಂತೆ ಗೋಚರವಾಗಿತ್ತವೆ. ಓದಿ ಓದಿ ಸವೆದ ಪುಸ್ತಕಗಳು ಹೊಸ ಅಂಗಿ ಚಡ್ಡಿ ಹೊಲಿಸಿಕೊಡಿ ಎಂದು ಪಟ್ಟು ಹಿಡಿದಂತೆ ಮಧ್ಯದ ಸಾಲಿನಲ್ಲಿ ಅಡಗಿರುತ್ತವೆ ಮಾನ ಕಾಪಾಡಿಕೊಳ್ಳಲು. ಇಂಗ್ಲೀಷ್, ಹಿಂದಿ ಪುಸ್ತಕಗಳು ಮಾತ್ರ ಮಡಿ ಮೈಲಿಗೆ ಎಂಬಂತೆ ಯಾರಿಂದಲೂ ಮುಟ್ಟಿಸಿಕೊಳ್ಳಲಾಗದಂತ ಸ್ಥಿತಿಯಲ್ಲಿ ಆರಾಮವಾಗಿರುತ್ತವೆ.
ಗ್ರಂಥಪಾಲಕ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಬಾಯಲ್ಲಿ ಕೆಂಪುರಸ ಉತ್ಪಾದನೆ ಮಾಡುತ್ತಾ ಮೂಡದ ಪೆನ್ನನ್ನು ಕಿವಿಗೆ ಸಿಕ್ಕಿಸಿಕೊಂಡು ತೂಕಡಿಸುತ್ತಿರುತ್ತಾನೆ. ಪೂಜಾರಿಯೇ ಮೈ ಮರೆತಿರುವಾಗ ಭಕ್ತರು ಯಾವ ಲೆಕ್ಕ..?
- ಸಂಗಮೇಶ ಡಿಗ್ಗಿ
ಮೊ : 8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್

 ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ ಜನಾಂದೋಲನ ರೂಪಿಸಿ ಮಾನವ ಘನತೆಯ ಬದುಕು (ಡಿಗ್ನಿಟಿ ಆಪ್ ಲೈಪ್)ನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದ ಉದ್ದೇಶಕ್ಕಾಗಿ 2016ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಅವರ ಹೆಸರು ಕೋಲಾರ ಜಿಲ್ಲೆಯ ಕೆಜಿಎಪ್ ಮೂಲದ ಬಿಜವಾಡ ವಿಲ್ಸನ್. ಆಂದ್ರದ ಓಂಗೋಲ್ ಜಿಲ್ಲೆಯ ಕಂಬಾಲದೇನು ಗ್ರಾಮದ ಬಿಜವಾಡ ಜಾಕೋಬ್ ಎಂಬುವವರು 1935ರ ಸಂದರ್ಭದಲ್ಲಿ ಕೆಜಿಎಪ್‌ಗೆ ಆಗಮಿಸಿ ಇಲ್ಲಿನ ಬಿಜಿಎಂಎಲ್ ಕಾರ್ಖಾನೆಯಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1966ರಲ್ಲಿ ವಿಲ್ಸನ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆರೆಯ ಕುಪ್ಪಂನಲ್ಲಿ ನೆರವೇರಿಸಿದ ವಿಲ್ಸನ್ ಕೆಜಿಎಪ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ತದಂತರ ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಹೊರುವ ಕುಲ ಕಸುಬು ತನ್ನ ಕೊನೆಯ ಮಗನಿಗೆ ತಟ್ಟದಿರಲಿ ಎಂಬ ಕಾರಣಕ್ಕೆ ವಿಲ್ಸನ್ ಅವರನ್ನು ಕುಪ್ಪಂನ ವಿದ್ಯಾರ್ಥಿ ನಿಲಯದಲ್ಲಿ ಸೇರಿಸಿ ಶಿಕ್ಷಣ ಕೊಡಿಸಿದ್ದೇ ಪಾಲಕರ ಮಹತ್ಸಾಧನೆಯಾಗಿತ್ತು. ಮಲ ಹೊರುವ ಸಮುದಾಯದವ ಎಂಬ ಕಾರಣಕ್ಕೆ ಸಹ ಪಾಠಿಗಳಿಂದ ಅವಮಾನಕೊಳಗಾಗಿದ್ದ ವಿಲ್ಸನ್ ಇದಕ್ಕೆ ಕಾರಣ ಹುಡುಕಲು ಹೊರಟಾಗ ಪಾಲಕರು ಸತ್ಯ ಮರೆಮ...

ಸಿದ್ಧರಾಮಯ್ಯ "ಕಿಸ್ ಭಾಗ್ಯ" ತಂದರೆ ಹುಡುಗರು ಏನ್ ಡಾಂಕ್ಯುಮೆಂಟ್ ಕೋಡಬೇಕು...?

ಸಿದ್ಧರಾಮಯ್ಯ "ಕಿಸ್ ಭಾಗ್ಯ" ತಂದರೆ ಹುಡುಗರು ಏನ್ ಡಾಂಕ್ಯುಮೆಂಟ್ ಕೋಡಬೇಕು...?

ಮೊನಚಾದ ಉಗುರು ಬೆನ್ನ ಮೇಲೆ ರಕ್ತ ಉಕ್ಕಿಸಿದೆ

ಒಂದು ಪ್ಲೇಟ್ ತಿಂಡಿ ಬೈಟೂ ಕಾಫೀ ಒಂದು ಒಳ್ಳೆ ಟೈಂಪಾಸ್ ಇಷ್ಟಿದ್ದರೆ ಸಾಕಲ್ಲ ನೀನಿರಲು ಯಾರಿಗೆ ಗೊತ್ತು ನಾನು ಹಸಿದಿದ್ದೆನೆಂದು ಹಸಿಬಿಸಿ ಕನಸೂರಿನಿಂದೆದ್ದು ನೀಟಾಗಿ ಮಡಚಲು ಬೆಡ್‍ಶೀಟ್ ಪಾಪವೆನಿಸುವದು ಅಯ್ಯೋ! ಅಲ್ಲಿ ಮುದುಡಿಕೊಂಡು ಮಲಗಿದ ಕನಸುಗಳಿವೆ ಎಬ್ಬಿಸಲು ನನ್ನಿಂದಾಗುವುದಿಲ್ಲ ಕೂಗಾಡುವ ಅಮ್ಮನಂತೆ ಬಂದೇ ಡಾರ್ಲಿಂಗ್ ಒಂದೇ ನಿಮಿಷ ಬೆರಳ ತುದಿಯಿಂದ ಮೇಘಸಂದೇಶ ಕ್ವಿಕ್ ಎಂದು ಪಟಾಪಟ್ ಒನ್ ಮಿನಿಟ್ ನ್ಯೂಡಲ್ಸ್ ಅಲ್ಲ ಇದು ಹದಮಾಡಿ ಬೇಯಿಸಿದ ಒಗ್ಗರಣೆಗೆ ರುಚಿ ಹಾಕಿದ ಸಾಂಬಾರಿನಂತೆ ಜೀವನ ನಿನಗಷ್ಟು ತಿಳಿಯಲಿಲ್ಲವೇ ಸ್ನಾನ ಮಾಡಿ ರೆಡಿಯಾಗುವುದು ನನಗೆ ಬೋರ್ ಎಂದು! ಐ ಯಾಮ್ ವೇಟಿಂಗ್ ಪಾರ್ ಯು ಒನ್ ಹವರ್ ಹತ್ತಾರು ಸಂದೇಶ ಗೂಡಿನಿಂದ ಹಾರಿದವು ಪಟಪಟನೆ ಪಾರಿವಾಳದಂತೆ ಏನು ಬೇಕು ಸರ್? ಮಾಣಿಗೆ ಉತ್ತರ ಹೇಳಿ ಸಾಕಾಯಿತು ಒಬ್ರು ಬರ್ತಾಯಿದಾರೆ ಪ್ಲೀಜ್ ವ್ಹೇಟ್ ಎಂದು ಟಕ್ ಎಂದು ಗ್ಲಾಸ್ ಕುಕ್ಕಿ ಹೋದ ಅವನಿಗದು ರೂಢಿಯಾಗಿ ಬಿಟ್ಟಿದೆ ಎನಿಸುತ್ತದೆ ಕಪ್ಪು ಕಿವಿಯಲ್ಲಿ ತುರುಕಿರುವ ಹತ್ತಿಯುಂಡೆ ನೋಡಿದರೆ ಅಗೋ ಬಂದೇಬಿಟ್ಟಿ ಬ್ಯೂಟಿಪಾರ್ಲರ್‍ನಿಂದ ಹುಟ್ಟಿದಂತೆ ಅಸಹನೀಯವಾದ ಸಿಟ್ಟು ಮುದುರಿ ಮಲಗಿತು ಮುಗುಳ್ನಗುತ್ತಾ ಐಸ್-ಕ್ರೀಂ ಆರ್ಡರ್ ಮಾಡಿ ಸ್ವಾರಿ ಕಣೋ ಎಂದಾಗ ಅರೇ ಬಿಲ್ಲು ನೀನು ಕೊಟ್ಟೆ! ಕೆಲ್ಸದ ಬಗ್ಗೆ ತಲೆಕೆಡಿಸಿಕೊ ಅಪ್ಪ ಗಂಡು ನೋಡಿದ್ದಾರೆ ನಾಳೆನೆ ಹೋಗಬೇಕು ನಿ...