ವಿಷಯಕ್ಕೆ ಹೋಗಿ

ಎಚ್ಚರವಿರುವುದು ಕನಸುಗಳು ಮಾತ್ರ






ಝಗಮಗಿಸುವ ರಂಗಮಂಚದಲ್ಲಿ ಬಣ್ಣ ಬಣ್ಣದ ವೇಷಭೂಷಣಗಳ ಝಲಕ್ಕು ಕಣ್ಣು ಕುಕ್ಕಿಸುತ್ತದೆ. ಮಾತಿಗೊಮ್ಮೆ ಶಹ್ಬಾಶ್ ಹೇಳುತ್ತಿದ್ದ ತುಟಿ ನಾಟಕ ಮುಗಿದ ಮೇಲೆ ಇದ್ದಕ್ಕಿದಂತೆ ತಟಟ್ಥವಾಗಿ ಬಿಡುತ್ತದೆ. ಮನದಾಳದಲ್ಲಿ ಹಾದು ಹೋದ ಪಾತ್ರಗಳ ನಿಜ ಕಲ್ಪನಾ ಲೋಕ ಮರೆಯಾಗಿ ವಾಸ್ತವದ ಆದಿಮಪ್ರಜ್ಞೆಗೆ ಮನಸ್ಸು ಬಂದಿಳಿಯುತ್ತದೆ. ಚಪ್ಪಾಳೆಯ ಕರಾಡತನ ಮುಗಿದ ಮೇಲೆ ಪಾತ್ರಧಾರಿಗಳ ನಿರ್ಗಮನದ ಜೊತೆ ಪ್ರೇಕ್ಷಕರು ನಡೆಯುತ್ತಾರೆ ಜೀವನ ಎಂಬ ನಾಟಕ ಆಡಲು.
ರಂಗಮಂದಿರ ಮಾತ್ರ ತಾನು ಇದ್ದಲ್ಲಿಯೇ ಇರುತ್ತದೆ ಯಾವ ಮುಖಭಾವ ಬದಲಿಸದೆ. ಅದೇ ಹಳೆಯ ಗೋಡೆ, ಸೂರ್ಯನ ಬೆಳಕನ್ನು ತಡವದೇ ಭೂಮಿಗೆ ತಲುಪಿಸಿವ ಛಾವಣಿ, ತುಕ್ಕು ಹಿಡಿದ ಕಬ್ಬಿಣದ ಕುರ್ಚಿಗಳು, ಮುಂದಿನ ನಾಟಕದ ಫಲಕ, ಹಿಂದಿನ ನಾಟಕದ ಟೀಕೇಟು, ಯಾರೋ ಸೇದಿ ಎಸೆದ ಗಣೇಶ ಬಿಡಿ, ಉಗುಳಿದ ಪಾನ್‍ಮಸಾಲ, ಬಸ್‍ಟಿಕೆಟ್, ತಿಂದು ಬಿಸಾಡಿದ ಕರ್ರುಂಕುರ್ರುಂ ಕುರುಕುರೆ ಬ್ಯಾಗಡಿ ಚೀಲ, ಮತ್ತೇ ಅನಾಥವಾಗಿ ಬಿದ್ದಿರುವ ಒಂದು ಒಂಟಿ ಚಪ್ಪಲಿ.
ಕುಣಿತದ ಭಾರಕ್ಕೆ ಸುಸ್ತಾಗಿ ರಂಗಮಂಚ ನಿದ್ರಿಸುತ್ತದೆ ನಾಳೆಯ ಕುಣಿತಕ್ಕೆ ಮೈಕೊಡಲು. ಬಣ್ಣಬಣ್ಣದ ಲೈಟ್‍ಗಳು ನೇಣಿಗೆ ಸಿಲುಕಿದಂತೆ ಕಾಣುತ್ತದೆ. ದೂರದಲ್ಲಿ ನಾಯಿ ನಾಟಕದ ಬ್ಯಾನರ್‍ಗೆ ಅಂಟಿಕೊಂಡು ಮಳೆ ಸಿಡಿಸುತ್ತಿರುತ್ತದೆ. ದೊಡ್ಡ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ನಾಟಕದ ಮಾಲೀಕ ಕಲೆಕ್ಷನ್ ರೂಂಗೆ ಎಂಟ್ರಿ ಕೊಡುತ್ತಾನೆ. ಸರಳುಗಳಿಂದ ಆವೃತ್ತವಾಗಿರುವ ಚಿಕ್ಕ ತಾತ್ಕಾಲಿಕ ಜೋಪಡಿಯಂತೆ ಕಾಣುವ ಕೋಣೆಯೊಳಗಗಡೆ ಧನಲಕ್ಷೀ ಕಿಲಕಿಲನೆ ನಗುತ್ತಾ ಡ್ರಾಯರಿನ ಒಳಗೆ ಬಂಧಿಯಾಗಿರುತ್ತಾಳೆ. ಹೆಗಲ ಮೇಲಿನ ಟವಲ್‍ನಿಂದ ಕೈ ಒರೆಸಿಕೊಂಡು ಚಕಚಕನೆ ನೋಟುಗಳನ್ನು ಎಣಿಸುತ್ತಾ ಲಾಭ-ನಷ್ಟ ತಿಳಿಯಲು ಕ್ಯಾಲ್ಕುಲೇಟರ್ ಬಟನ್‍ಗಳಿಗೆ ಕಚಗುಳಿ ಇಡಲು ತೋರುಬೆರಳು ಸಂತೋಷದಿಂದ ಕುಣಿಯುತ್ತದೆ. ಜಾತಿಕುಲವೆನ್ನದೆ ಊರೂರು ಅಡ್ಯಾಡಿ ಬಂದ, ಮಾಸಿಹೋದ ಅಕ್ಷರಗಳನ್ನು ನೆಪಮಾತ್ರಕ್ಕೆ ಹೊಂದಿರುವ ಐದು ರೂಪಾಯಿಯ ನೋಟು ಶೀಲ ಕಳೆದುಕೊಂಡ ಹೆಣ್ಣಿನಂತೆ ಡ್ರಾಯರಿನ ಮೂಲೆಯಲ್ಲಿ ಅಡಗಿ ಕಣ್ಣೀರು ಸುರಿಸುತ್ತಿರುತ್ತದೆ.
ಡ್ರೆಸಿಂಗ್ ರೂಂನಲ್ಲಿ ಎಳೆದಿರುವ ಹಗ್ಗಕ್ಕೆ ಕುಣಿದು ಸುಸ್ತಾದ ಬಟ್ಟೆಗಳು ಜೋತುಬಿದ್ದಿರುತ್ತವೆ ಬಾವಲಿಯ ಹಾಗೆ. ವೇಷ ತೊಡುವಾಗಿನ ತಾಳ್ಮೆ ಆತ್ಮಹತ್ಯೆ ಮಾಡಿಕೊಂಡು ಧಾವಂತದಲ್ಲಿ ಭಾರ ಕಳೆದುಕೊಳ್ಳುವಂತೆ ಬಟ್ಟೆ ಬಿಚ್ಚುತ್ತಿರುತ್ತಾರೆ. ‘ದೇಹವು ಮೂಳೆ ಮೌಂಸದ ತಡಿಕೆ’ ಎನ್ನುವ ಹಾಡು ಕಂಬಕ್ಕೆ ಬಿಗಿಯಾಗಿ ಕಟ್ಟಿದ ಮೈಕ್‍ನಿಂದ ಉದುರಿ ಬರುತ್ತದೆ. ಪಾತ್ರಧಾರಿಣಿಯ ‘ಕುಲುಕಾಟ’ಕ್ಕೆ ಮನಸೋತ ರಸಿಕ ಮಹಾಶಯ ಐದು ಬೆರಳ ಉಂಗುರು ತೋರಿಸು, ಹಲ್ಲು ಕಿರಿಯುತ್ತಾ ಶೃಂಗಾರ ಭಾವದ ಮುಖಹೊತ್ತು ‘ವ್ಯಾಪಾರ’ದ ಬಗ್ಗೆ ಮಾತಾಡಲು ತುದಿಗಾಲ ಮೇಲೆ ನಿಂತಿರುತ್ತಾನೆ. ಮನೆಗೆ ಬನ್ನಿ ಎಂದು ಊಟದ ಅಹ್ವಾನ ನಿಡುತ್ತಾನೆ ನೆಪಕ್ಕಾಗಿ.
ಜಗಮಗಿಸೋ ಬಟ್ಟೆಗಳನ್ನು ಹಾಕಿಕೊಂಡ ಪಾತ್ರಧಾರಿಗಳು ಕ್ಷಣಮಾತ್ರದಲ್ಲಿಯೇ ಶತಮಾನಗಳಷ್ಟು ಹಿಂದೆ ತೊಳೆದ ಟವಲ್ ಸುತ್ತುಕೊಂಡು ಮುಖ ತೊಳೆಯಲು ನುಗ್ಗಿ ಬೆಂಡಾದ ಡ್ರಂನ ಒಳಗೆ ಬೆಂಡಾದ ಚೊಂಬನ್ನು ಹುಡುಕುತ್ತಾರೆ. ಹೊಳೆಯುವ ಬೆಳಕಿನಲ್ಲಿ ಮೆತ್ತಿಕೊಂಡ ಮೇಕಪ್ ಕತ್ತಲ ಬಚ್ಚಲು ಸಂಧಿಯಲ್ಲಿ ಕಳಚಿ ಹೋಗುತ್ತದೆ ಮೋರಿ ನೀರಿನೊಳಗೆ ಸೇರಿಕೋಳ್ಳಲು.
ಹೊಟ್ಟಯಲ್ಲಿ ಹಸಿವು ಸಣ್ಣಗೆ ನಾಟಕ ಆರಂಭಿಸಿರುತ್ತದೆ. ಎಲ್ಲಿಯೋ ಇದ್ದ ಅನಾಮಧೇಯ ಪಾತ್ರಧಾರಿಗಳು ಬಂದು ಸೇರುವಷ್ಟರಲ್ಲಿ ಸ್ಟೋ ಮೇಲೆ ಇದ್ದ ಅನ್ನ ಅಚ್ಚ ಬಿಳಿಮಲ್ಲಿಗೆಯಂತೆ ಅಹ್ವಾನ ನೀಡುತ್ತದೆ. ಅದರ ಜೊತೆಗೆ ಸಾಂಬರ್ ಇಲ್ಲದೇ ಹೋದರೆ ಉಪ್ಪಿನಕಾಯಿ ಆದರೂ ಆದಿತೂ! ಅಲ್ಲಿ ಚಂದದ ದೃಶ್ಯ ಮೈಕೊಡವಿಕೊಂಡಿರುತ್ತದೆ. ಸಹಭೋಜನ ಮಾಡುತ್ತಾ ಅವರಿವರೂ ವೇಧಿಕೆಯಲ್ಲಿ ಮಾಡಿದ ತಪ್ಪನ್ನು ಅನುಕರಣೆ ಮಾಡುತ್ತಾ, ಕಾಲೆಳೆಯುತ್ತಾ, ಕಲೆಕ್ಷನ್ ನಷ್ಟದ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ಯುದ್ಧಗೆದ್ದ ಅಲೆಕ್ಸ್‍ಗಾಂಡರ್ ತರ ಜಗದ ಒಡೆಯೆರೆಂಬಂತೆ ಸಂತೋಷ ಉಕ್ಕಿಸುತ್ತಿರುತ್ತಾರೆ. ಅಷ್ಟರಲ್ಲಿ ಅಯ್ಯೋ ಹಾಲು ಉಕ್ಕುತ್ತಿದೆ ಎಂದು ಪುಟ್ಟ ಒಲೆಯಲ್ಲಿ ಇಟ್ಟ ಹಾಲಿನ ಪಾತ್ರೆಯ ಕಡೆ ಧಾವಿಸುತ್ತಾಳೆ ನಟಿಮಣಿ. ಪುಟ್ಟ ಮಗು ಜಾತ್ರೆಯ ಕರಿಬಿಳಿ ಬೆಂಡುಬತ್ತಾಸನಂತಿರುವ ಹಾರ್ಮೋನಿಯಂ ಮೇಲೆ ಕೈಯಾಡಿಸುತ್ತಿರುತ್ತದೆ.
ಊಟವಾದ ಮೇಲೆ ಕೆಂಪಡಿಕೆಗೆ ಸುಣ್ಣ ಸೇರಿಸಿ ಅರಗಿ ತಿನ್ನಲು ಹಸಿರೆಲೆ ಪ್ಲಾಸ್ಟಿಕ್ ಕವರ್‍ನಿಂದ ಹೊರಬಂದು ದವಡೆಗಳಲ್ಲಿ ಸಣ್ಣಗಾಗುತ್ತದೆ. ಮತ್ತೊಬ್ಬ ಹಚ್ಚಿದ ಆರಿದ ಅರ್ಧ ಬಿಡಿಗೆ ಬೆಂಕಿ ಹಚ್ಚಲು ಬನಿಯನ್‍ನ ಜೇಬಿನೊಳಗೆ ಬಲಗೈ ಸೇರಿಸುತ್ತಾನೆ. ಸ್ಟಾರ್,ವಿಮಲ್,, ಗಾಯಚಾಪ ಹೆಸರಿರುವ ಬ್ರಾಂಡೆಡ್ ಗುಟುಕಾ ಚೀಟಿಗಳು ಒಬ್ಬರಿಂದ ಒಬ್ಬರಿಗೆ ವಿನಿಮಯವಾಗುತ್ತವೆ. ದುಶ್ಚಟವೆಂದೂ ದೂರವಿರುವ ಇನ್ನೊಬ್ಬ ಮೈಲುದೂರದಲ್ಲಿರುವ ಗೆಳತಿಯನ್ನು ನೆನಸಿಕೊಳ್ಳುತ್ತಾ ಪೋಸ್ಟರ್ ಮೇಲಿರುವ ಚಲುವೆಯ  ಮುಖನೋಡುತ್ತಾ ಮೈಮರೆತಿರುತ್ತಾನೆ.
ಕತ್ತಲನ್ನು ಸೀಳಿಬರುವ ರಾತ್ರಿಯಲ್ಲಿ ಇಡೀ ಊರಿಗೆ ಊರೇ ಮಲಗಿ ಗಾಡನಿದ್ರೆಯಲ್ಲಿದ್ದಾಗ ಎಚ್ಚರವಾಗಿದ್ದು ಬೀದಿದೀಪಗಳು ಮತ್ತು ಇವರ ಕನಸುಗಳು ಮಾತ್ರ.
-    ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಏಕಾಂಗಿಯೊಬ್ಬನ ದಾರಿಯ ಕವಲುಗಳು...

ಇಷ್ಟೂ ದೂರ ಸಾಗಿ ಬಂದರೂ ನಾನು ಇನ್ನು ಗುರಿ ಮುಟ್ಟೆ ಇಲ್ಲ ಎಂಬ ಕಠೋರ ಸತ್ಯ ಅರಿವಿಗೆ ಬರುವದು ಒಮ್ಮೆ ಕತ್ತು ತಿರುಗಿಸಿ ಹಿಂದೆ ನೋಡಿದಾಗ. ನಾವು ಅಂದುಕೊಂಡ ಕನಸು, ನಾವು ಕಟ್ಟಿಕೊಂಡ ಗುರಿಯನ್ನು ತಲುಪುವ ಹಾದಿಯಲ್ಲಿ ನೂರೆಂಟು ಕವಲುಗಳು, ತಗ್ಗುದಿನ್ನೆಗಳು ಹೆಡೆ ಬಿಚ್ಚಿ ಸ್ವಾಗತಿಸುತ್ತವೆ. ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ. ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ. ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..? ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ

ಮೊಸರು ಮಾರುವ ಹುಡುಗನ ಸೈಕಲ್ ಮತ್ತು ಪ್ಲಾಶ್‍ಬ್ಯಾಕ್ ನೆನಪು

‘ಕಾಲನ ಕೈಗೆ ದೇವರು ಸೃಷ್ಟಿ ಮಾಡಿದ ಜಗತ್ತು ಉಳಿಯುವದಿಲ್ಲವೆಂದ ಮೇಲೆ ನಾವು ಯಾವ ಲೆಕ್ಕ’ ಏಲ್ಲೋ ಓದಿದ ಅಣಿಮುತ್ತು ಮೊನ್ನೆ ದುತ್ತನೆ ಮೆದುಳಿನಲ್ಲಿ ಗುಂಗಿ ಹುಳದಂತೆ ಕಾಡತೊಡಗಿತು. ಕಾರಣವಿಷ್ಟೇ, ಎಮ್.ಎ ಮುಗಿಯುವ ಸಮಯವೂ ಹೌದು, ಅದಕ್ಕಿಂತ ಮುಖ್ಯವಾಗಿ “ಆನಂದಮಾರ್ಗ ಆಶ್ರಮ” ತೊರೆಯಬೇಕಲ್ಲ ಎನ್ನುವ ನೋವು. ಆ ನೋವಿಗೆ ಕಾರಣವಾದವನು ದಿನಾಲೂ ಗಟ್ಟಿ ಕೆನೆ ‘ಮೊಸರು ಮಾರುವ ಹುಡುಗ’ ಮತ್ತು ಆತನ ‘ಸೈಕಲ್’. ಆ ಹುಡುಗ 7ನೇ ತರಗತಿ. ಯಲ್ಲಪ್ಪ ಮನ್ಸೂರ. ಸುಮಾರು 3 ಕಿ.ಮಿ ಸೈಕಲ್ ತುಳಿದು ಮೊಸರು ಮಾರುವ ಕಾಯಕ ಮಾಡುತ್ತಾನೆ. ಅದಕ್ಕಿಂತ ಹೆಚ್ಚಾಗಿ ಮುಂಜಾನೆಯ ಎಳೆ ಬಿಸಿಲಿನಲ್ಲಿ ಮಲಗಿದ್ದ ಹಾಸಿಗೆ ಹೊದ್ದು ಮಲಗಿದ್ದ ನನಗೆ ಎಚ್ಚರಿಸುವ ಅಲರಾಂ ಬೆಲ್ ಎಂತಲೇ ಹೇಳಬಹುದು. ಅವನ ಸೈಕಲ್ ಮಾಯಲೋಕದ ಕಿನ್ನರರು ತಮ್ಮ ವಾಹನಗಳಿಗೆ ಶೃಂಗಾರ ಮಾಡಿದಂತೆ ಗಾಲಿಗಳಿಗೆ ರಿಬ್ಬನ್ ಸುತ್ತಿ, ಯುದ್ಧಕ್ಕೆ ಸಿದ್ಧನಾಗಿದ್ದೆನೆ ಎನ್ನುವ ರೀತಿ ಭಾವುಟ ತೋರಿಸಿ, ಗೆಂಡೆಗಳನ್ನು ಗಾಳಿಗೆ ಹಾರಾಡಿಸುತ್ತಾ ಗಂಟೆ ಬಾರಿಸುವ ಗತ್ತು ನನ್ನನ್ನು ಬಾಲ್ಯದ ಪ್ಲಾಶ್‍ಬ್ಯಾಕ್‍ಗೆ ಕರೆದೊಯ್ಯುವಂತೆ ಮಾಡಿತ್ತು. ತೂತು ಬಿದ್ದು ಪುಕ್ಸಟ್ಟೆ ಅಂಡು ಕಾಣಿಸುವ ದೊಗಳೆ ಚಡ್ಡಿ ಹಾಕಿಕೊಳ್ಳುತ್ತಿದ್ದ ವಯಸ್ಸಿನ ಹುಡುಗ ನಾನಾಗಿದ್ದೆ. ‘ಮೊದ ಮೊದಲು ಕೊಂಡ ಹೀರೋ ಸೈಕಲ್’ ಎಂಬತೆ ಪುಟ್ಟ ಸೈಕಲ್ ನಮ್ಮ ಮನೆಯ ಅಂಗಳವನ್ನು ಅಲಂಕರಿಸಿತ್ತು. ಇಡೀ ಊರಿಗೆ ಮೊದಲ ಸೈಕಲ್. ಊರಿನ ಜನ ಬಂದು ಅದನ್ನು ಮೈಸೂರ

ಜನರಲ್ ಬೋಗಿಯಂಬ ವೈವಿಧ್ಯಮಯ ತಾಣ...

‘ಯುವರ್ ಅಟೇಕ್ಷನ್ ಪ್ಲೀಸ್ ಹುಬ್ಬಳ್ಳಿ ಟೂ ಸೋಲಾಪೂರ ಪ್ಯಾಸೆಂಜರ್ ಟ್ರೇನ್ ಅರೈವಲ್” ಗಾನ ಮೊಳಗಿಸುತ್ತಾ ಮೈಕ್ ಎಚ್ಚರಿಸುತ್ತಿದ್ದಂತೆ ತಮ್ಮ ತಮ್ಮ ಬ್ಯಾಗ್‍ಗಳನ್ನು ಎತ್ತಿಕೊಂಡು, ಮಕ್ಕಳ ಕೈ ಹಿಡಿದು, ಜೊತೆ ಬಂದವರಿಗೆ ಗುಡ್ ಬೈ ಹೇಳಿ ಬೋಗಿಯೊಳಗೆ ಕಾಲಿಡುವ ಮಂದಿ ಇರುವೆಗಳು ಸಕ್ಕರೆಗೆ ಮುತ್ತಿಕ್ಕುವಂತೆ ಕಾಣುತ್ತದೆ. ಕೆಲಸದ ಬೇರೆ ಊರಿಗೆ ತೆರಳುವವರು, ಅಪ್ಪಅಮ್ಮನನ್ನು ಕಾಣಲು ತೆರಳುವವು, ಹೆಂಡತಿಯ ಊರಿಗೆ, ಸ್ನೇಹಿತರ ಮಧುವೆ ಮುಂಜಿಗೆ, ಇಲ್ಲಾ ಸಂಬಂಧಗಳನ್ನು ಕಡಿದುಕೊಂಡು ಪರವೂರಿನಲ್ಲಿ ನೆಲೆ ಕಾಣಲು, ಹಲವಾರು ಕಾರಣಗಳನ್ನು ಇಟ್ಟುಕೊಂಡು ಬಂದ ಪ್ರಯಾಣಿಕರು ಸೀಟು ಹಿಡಿಯುವ ಧಾವಂತದಲ್ಲಿ ಇದ್ದರೆ ಕಂಕಳಲ್ಲಿ ಕುಳಿತ ಮಗು ಬೆರಗುಗಣ್ಣಿನಿಂದ ಕಿಟಕಿಯತ್ತ ಕಣ್ಣು ಹಾಯಿಸುತ್ತದೆ. ಜಾತೀಗೀತಿಯ ಬಂಧನವನ್ನು ಕಾಣದ ಏಕೈಕ ಸ್ಥಳವೆಂದರೆ ಅದು ರೈಲು ಬೋಗಿ. ಪಕ್ಕದವನ ಜಾತಿಯನ್ನು ಕೇಳದೆ ಮೈ ಅಂಟಿಸಿಕೊಂಡು ನಿಟ್ಟುಸಿರು ಬಿಡುತ್ತಾ ತಮ್ಮದೆ ಯೋಚನಾ ಲಹರಿಯಲ್ಲಿ ಮುಳುಗಿ ಬಟ್ಟೆಗಳನ್ನು ಸರಿಮಾಡಿಕೊಳ್ಳುತ್ತಾರೆ. ಸುತ್ತಲು ಒಮ್ಮೆ ಕಣ್ಣು ಹಾಯಿಸಿದರೆ ಸೂಟುಬೂಟು ಹಾಕಿಕೊಂಡ ಶ್ರೀಮಂತ, ದೊಗಳೆ ಅಂಗಿ ಧರಿಸಿದ ಮದ್ಯಮ ಕುಟುಂಬ ವ್ಯಕ್ತಿ, ಧೊತರಕ್ಕೆ ನೀಲಿಬಳಿದುಕೊಂಡ ಹಳ್ಳಯ ಹಿರಿಯ, ದಾಡಿ ಬಿಟ್ಟ ಮುಲ್ಲಾ, ಆಗ ತಾನೆ ಮಧುವೆಯಾದ ಜೋಡಿಗಳು, ಹಳ್ಳಿ ಹೆಂಗಸರು, ಚಿಕ್ಕಮಕ್ಕಳು, ಅಷ್ಟೆ ಅಲ್ಲದೆ ಬಿಸ್ಕಿಟ್ ಮಾರುವವವರು, ಬಿಕ್ಷುಕರು, ಚಪ್ಪಾಳೆ ತಟ್ಟುವ ಮಂಗಳಮು