ವಿಷಯಕ್ಕೆ ಹೋಗಿ

ಮೊನಚಾದ ಉಗುರು ಬೆನ್ನ ಮೇಲೆ ರಕ್ತ ಉಕ್ಕಿಸಿದೆ

ಒಂದು ಪ್ಲೇಟ್ ತಿಂಡಿ
ಬೈಟೂ ಕಾಫೀ
ಒಂದು ಒಳ್ಳೆ ಟೈಂಪಾಸ್
ಇಷ್ಟಿದ್ದರೆ ಸಾಕಲ್ಲ ನೀನಿರಲು


ಯಾರಿಗೆ ಗೊತ್ತು
ನಾನು ಹಸಿದಿದ್ದೆನೆಂದು

ಹಸಿಬಿಸಿ ಕನಸೂರಿನಿಂದೆದ್ದು
ನೀಟಾಗಿ ಮಡಚಲು ಬೆಡ್‍ಶೀಟ್
ಪಾಪವೆನಿಸುವದು
ಅಯ್ಯೋ!
ಅಲ್ಲಿ ಮುದುಡಿಕೊಂಡು ಮಲಗಿದ ಕನಸುಗಳಿವೆ
ಎಬ್ಬಿಸಲು ನನ್ನಿಂದಾಗುವುದಿಲ್ಲ
ಕೂಗಾಡುವ ಅಮ್ಮನಂತೆ

ಬಂದೇ ಡಾರ್ಲಿಂಗ್ ಒಂದೇ ನಿಮಿಷ
ಬೆರಳ ತುದಿಯಿಂದ ಮೇಘಸಂದೇಶ
ಕ್ವಿಕ್ ಎಂದು ಪಟಾಪಟ್
ಒನ್ ಮಿನಿಟ್ ನ್ಯೂಡಲ್ಸ್ ಅಲ್ಲ ಇದು
ಹದಮಾಡಿ ಬೇಯಿಸಿದ ಒಗ್ಗರಣೆಗೆ
ರುಚಿ ಹಾಕಿದ ಸಾಂಬಾರಿನಂತೆ ಜೀವನ

ನಿನಗಷ್ಟು ತಿಳಿಯಲಿಲ್ಲವೇ
ಸ್ನಾನ ಮಾಡಿ ರೆಡಿಯಾಗುವುದು ನನಗೆ ಬೋರ್ ಎಂದು!

ಐ ಯಾಮ್ ವೇಟಿಂಗ್ ಪಾರ್ ಯು ಒನ್ ಹವರ್
ಹತ್ತಾರು ಸಂದೇಶ
ಗೂಡಿನಿಂದ ಹಾರಿದವು ಪಟಪಟನೆ ಪಾರಿವಾಳದಂತೆ

ಏನು ಬೇಕು ಸರ್?
ಮಾಣಿಗೆ ಉತ್ತರ ಹೇಳಿ ಸಾಕಾಯಿತು
ಒಬ್ರು ಬರ್ತಾಯಿದಾರೆ ಪ್ಲೀಜ್ ವ್ಹೇಟ್ ಎಂದು
ಟಕ್ ಎಂದು ಗ್ಲಾಸ್ ಕುಕ್ಕಿ ಹೋದ
ಅವನಿಗದು ರೂಢಿಯಾಗಿ ಬಿಟ್ಟಿದೆ ಎನಿಸುತ್ತದೆ
ಕಪ್ಪು ಕಿವಿಯಲ್ಲಿ ತುರುಕಿರುವ ಹತ್ತಿಯುಂಡೆ ನೋಡಿದರೆ

ಅಗೋ ಬಂದೇಬಿಟ್ಟಿ
ಬ್ಯೂಟಿಪಾರ್ಲರ್‍ನಿಂದ ಹುಟ್ಟಿದಂತೆ
ಅಸಹನೀಯವಾದ ಸಿಟ್ಟು ಮುದುರಿ ಮಲಗಿತು
ಮುಗುಳ್ನಗುತ್ತಾ ಐಸ್-ಕ್ರೀಂ ಆರ್ಡರ್ ಮಾಡಿ
ಸ್ವಾರಿ ಕಣೋ ಎಂದಾಗ

ಅರೇ
ಬಿಲ್ಲು ನೀನು ಕೊಟ್ಟೆ!
ಕೆಲ್ಸದ ಬಗ್ಗೆ ತಲೆಕೆಡಿಸಿಕೊ
ಅಪ್ಪ ಗಂಡು ನೋಡಿದ್ದಾರೆ
ನಾಳೆನೆ ಹೋಗಬೇಕು
ನಿನ್ ಮೀಟ್ ಮಾಡೋದು ಕಷ್ಟ ಕಣೋ
ಇನ್ನು ಏನೇನೋ...

ನಿಂತ ಜಾಗದಲ್ಲೆ ಬೇರು ಬಿಡಬಹುದಿತ್ತು
ಆ ಸ್ಕೂಟರಪ್ಪ ಪೊಂವ್ ಎಂದಾಗ
ಎಚ್ಚರಗೊಂಡೆ ಮತ್ತೊಂದು ಸಲ
ಅದಾಗಲೇ ಬಂದೆ ಅಪ್ಪಾ
ಅಂಡ್ರಾಯ್ಡ್ ಪೋನಿಗೆ ಮೆಲ್ಲಗೆ ಸವರಿದೆ
ನೋವಾಗಬಾರದು ಎಂದು

ನೀನಗೇನು ಗೋತ್ತು?

ಮೊನಚಾದ ಉಗುರು
ಬೆನ್ನ ಮೇಲೆ ರಕ್ತ ಉಕ್ಕಿಸಿದೆಯಂದು

ಅದೆಷ್ಟು ಸರಾಗವಾಗಿ ನಡೆದುಬಿಟ್ಟಿ
ನನ್ನನ್ನು ಯಾರೋ ಹಿಡಿದಂತೆ
ಕಾಲುಗಳು ಚಲಿಸುತಿವೆ
ಟ್ರಾಫಿಕ್ ಜಾಂನ ವಾಹನದಂತೆ

ಹಂಗೆ ತಿರುಗಿ ಬೈ ಮತ್ತೇ ಸಿಗ್ತೀನಿ
ಕ್ರಾಸ್‍ದಾಟಿ ಮರೆಯಾದೆ
ಕಠೋರ ಸೂರ್ಯನಂತೆ ಮೋಹಕವಾಗಿ

ಒಂದು ಪ್ಲೇಟ್ ತಿಂಡಿ
ಬೈಟೂ ಕಾಫೀ
ಒಂದು ಒಳ್ಳೆ ಟೈಂಪಾಸ್
ಇಷ್ಟಿದ್ದರೆ ಸಾಕಲ್ಲವೇ ನಿನಗೆ ನಾನಿರಲು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್

 ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ ಜನಾಂದೋಲನ ರೂಪಿಸಿ ಮಾನವ ಘನತೆಯ ಬದುಕು (ಡಿಗ್ನಿಟಿ ಆಪ್ ಲೈಪ್)ನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದ ಉದ್ದೇಶಕ್ಕಾಗಿ 2016ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಅವರ ಹೆಸರು ಕೋಲಾರ ಜಿಲ್ಲೆಯ ಕೆಜಿಎಪ್ ಮೂಲದ ಬಿಜವಾಡ ವಿಲ್ಸನ್. ಆಂದ್ರದ ಓಂಗೋಲ್ ಜಿಲ್ಲೆಯ ಕಂಬಾಲದೇನು ಗ್ರಾಮದ ಬಿಜವಾಡ ಜಾಕೋಬ್ ಎಂಬುವವರು 1935ರ ಸಂದರ್ಭದಲ್ಲಿ ಕೆಜಿಎಪ್‌ಗೆ ಆಗಮಿಸಿ ಇಲ್ಲಿನ ಬಿಜಿಎಂಎಲ್ ಕಾರ್ಖಾನೆಯಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1966ರಲ್ಲಿ ವಿಲ್ಸನ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆರೆಯ ಕುಪ್ಪಂನಲ್ಲಿ ನೆರವೇರಿಸಿದ ವಿಲ್ಸನ್ ಕೆಜಿಎಪ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ತದಂತರ ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಹೊರುವ ಕುಲ ಕಸುಬು ತನ್ನ ಕೊನೆಯ ಮಗನಿಗೆ ತಟ್ಟದಿರಲಿ ಎಂಬ ಕಾರಣಕ್ಕೆ ವಿಲ್ಸನ್ ಅವರನ್ನು ಕುಪ್ಪಂನ ವಿದ್ಯಾರ್ಥಿ ನಿಲಯದಲ್ಲಿ ಸೇರಿಸಿ ಶಿಕ್ಷಣ ಕೊಡಿಸಿದ್ದೇ ಪಾಲಕರ ಮಹತ್ಸಾಧನೆಯಾಗಿತ್ತು. ಮಲ ಹೊರುವ ಸಮುದಾಯದವ ಎಂಬ ಕಾರಣಕ್ಕೆ ಸಹ ಪಾಠಿಗಳಿಂದ ಅವಮಾನಕೊಳಗಾಗಿದ್ದ ವಿಲ್ಸನ್ ಇದಕ್ಕೆ ಕಾರಣ ಹುಡುಕಲು ಹೊರಟಾಗ ಪಾಲಕರು ಸತ್ಯ ಮರೆಮ...

ಸಿದ್ಧರಾಮಯ್ಯ "ಕಿಸ್ ಭಾಗ್ಯ" ತಂದರೆ ಹುಡುಗರು ಏನ್ ಡಾಂಕ್ಯುಮೆಂಟ್ ಕೋಡಬೇಕು...?

ಸಿದ್ಧರಾಮಯ್ಯ "ಕಿಸ್ ಭಾಗ್ಯ" ತಂದರೆ ಹುಡುಗರು ಏನ್ ಡಾಂಕ್ಯುಮೆಂಟ್ ಕೋಡಬೇಕು...?